News & Events
ಜಿತೇಂದ್ರ ಕುಂದೇಶ್ವರ
ಎಂಬತ್ತು ದಾಟಿದ #ಯುವಕ!ನ ದಣಿವರಿಯದ ಹೋರಾಟ ಕಲ್ಲಡ್ಕ ಶಾಲೆಯ ಸಂಸ್ಕಾರಯುತ ಶಿಕ್ಷಣದ ದೀಪ ಪ್ರದಾನ #ಕಲ್ಲಡ್ಕ #ಕಥನ #ಭಾಗ-2 ಮೊನ್ನೆ ದೀಪ ಪ್ರದಾನ ಕಾರ್ಯಕ್ರಮಕ್ಕೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ನಮ್ಮ ವಿಶ್ವವಾಣಿಯ ಸಂಪಾದಕರಾದ #ವಿಶ್ವೇಶ್ವರ ಭಟ್ಟರು ಮುಖ್ಯ ಅತಿಥಿ. ಪತ್ರಿಕೆ ಎಂದರೆ ಪ್ರಗತಿ ಪರ, ಎಡಚಿಂತನೆಯ ಬರಹಗಳಷ್ಟೇ ಅಂಕಣವಾಗಬಲ್ಲದು ಎಂದು ಬಲಪಂಥೀಯರೂ ತಿಳಿದುಕೊಂಡಿದ್ದ ಕಾಲ ಘಟ್ಟದಲ್ಲಿ ಬಲಪಂಥೀಯ, #ರಾಷ್ಟ್ರೀಯ ಚಿಂತನೆಯನ್ನು ಸಂಪಾದಕೀಯ ಪುಟಗಳಲ್ಲಿ ಅಗ್ರಸ್ಥಾನ ನೀಡಿದ್ದು ಮಾತ್ರವಲ್ಲದೆ #ವಿಜಯಕರ್ನಾಟಕ ಪತ್ರಿಕೆಯಲ್ಲಿ ಎರಡು ದಶಕಗಳ ಹಿಂದೆ ವೇದಿಕೆ ನಿರ್ಮಿಸಿ
ಜಿತೇಂದ್ರ ಕುಂದೇಶ್ವರ
#ಕಲ್ಲಡ್ಕ #ಪ್ರಭಾಕರ #ಭಟ್…* _ಸಂಘಟನೆಯಿಂದ ಶಕ್ತಿ ಎನ್ನುವುದನ್ನು ಸಾಧಿಸಿ ತೋರಿಸಿ ಇದೀಗ ವ್ಯಕ್ತಿಯೇ ಪ್ರಖರ ಶಕ್ತಿಯಾಗಿ ಪ್ರಜ್ವಲಿಸಿದವರು.. ಕಲ್ಲಡ್ಕ ಭಟ್ಟರ ಕುರಿತು ಬಹಳ ಕೇಳಿದ್ದರೂ ಪತ್ರಕರ್ತನಾಗಿ ನಾನು ಅಂತರದಲ್ಲಿಯೇ ಇದ್ದವನು. ಮೊದಲ ಭೇಟಿ ಹತ್ತು ವರ್ಷಗಳ ಹಿಂದೆ.. ಸೀತಾರಾಮ ಕೆದಿಲಾಯರ 25 ಸಾವಿರ ಕಿ.ಮೀ ನಡೆದೇ ಭಾರತ ಪರಿಕ್ರಮ ಯಾತ್ರೆ ಮಂಗಳೂರಿಗೆ ಬಂದಾಗ. ನಾನು #ಕನ್ನಡಪ್ರಭ ದಲ್ಲಿದ್ದೆ. ಸಿಕ್ಕಿದ 7-8 ನಿಮಿಷದಲ್ಲಿ ಕಲ್ಲಡ್ಕ ಭಟ್ರ ಸಂದರ್ಶನ ಮಾಡಿದ್ದೆ, ಸಂಪಾದಕ ವಿಶ್ವೇಶ್ವರ ಭಟ್ಟರು ರಾಜ್ಯಪುಟದಲ್ಲಿ ಪ್ರಕಟಿಸಿದ್ರು. ನನ್ನ ಬಳಿ
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಶ್ರೀ ಗುರೂಜಿ ಸಂಸ್ಮರಣೆ 16.2.2023
ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೇ ಸರಸಂಘಚಾಲಕರಾದ ಶ್ರೀ ಗುರೂಜಿಯವರ ಜನ್ಮದಿನಾಚರಣೆಯನ್ನು ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದಲ್ಲಿ ಆಚರಿಸಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಶಿಶುಮಂದಿರ ಹಾಗೂ ಪೂರ್ವಗುರುಕುಲದ ೧ ಮತ್ತು ೨ನೇ ತರಗತಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಪ್ರತಿಭಾ ಪ್ರದರ್ಶನ ನಡೆಯಿತು. ಮುಖ್ಯ ಅತಿಥಿಯಾಗಿ ಟಿ.ಬಿ.ಎ ಕೆಂಬ್ರಿಡ್ಜ್ ಇಂಟರ್ನ್ಯಾಶನಲ್ ಸ್ಕೂಲ್, ಮಂಗಳೂರು ಇದರ ಪ್ರಾಂಶುಪಾಲರಾದ ಶ್ರೀಮತಿ ಸುರೇಖಾ ಎಂ.ಹೆಚ್ ಇವರು ಭಾರತಮಾತೆ ಹಾಗೂ ಶ್ರೀಗುರೂಜಿ ಭಾವಚಿತ್ರದ ಮುಂಭಾಗದಲ್ಲಿ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿ ಕಾರ್ಯಕ್ರಮದಲ್ಲಿ ಪುಟಾಣಿ ವಿದ್ಯಾರ್ಥಿಗಳು ಮಾಡಿದ
ಶ್ರೀರಾಮ ಪದವಿ ಪೂರ್ವ ವಿಭಾಗದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ದೀಪಪ್ರದಾನ 8.2.2023
ಪದವಿಪೂರ್ವ ವಿಭಾಗದ ವಿದ್ಯಾರ್ಥಿಗಳ ದೀಪ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಗೋವಾ ರಾಜ್ಯದ ಮುಖ್ಯಮಂತ್ರಿ ಶ್ರೀ ಡಾ. ಪ್ರಮೋದ್ ಸಾವಂತ್ ಇವರು ಶ್ರೀರಾಮ ವಿದ್ಯಾಕೇಂದ್ರದಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶ್ರೀರಾಮನ ಗುಣಗಳು ಮೈಗೂಡಲಿ, ವಿದ್ಯಾರ್ಥಿಗಳು ಕೌಶಲ್ಯ ಆಧಾರಿತ ಶಿಕ್ಷಣದ ಕಡೆಗೆ ಆಸಕ್ತಿ ವಹಿಸಬೇಕು ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾಕೇಂದ್ರದ ಸಂಸ್ಥಾಪಕರಾದ ಡಾ| ಪ್ರಭಾಕರ್ ಭಟ್ ಕಲ್ಲಡ್ಕ ಇವರು ಶ್ರೀರಾಮ ವಿದ್ಯಾಕೇಂದ್ರವು ಅನೇಕ ಅನುಭವಗಳ ಕಣಜ ನಮ್ಮ ವಿದ್ಯಾಭ್ಯಾಸ ಕೇವಲ
ಶ್ರೀರಾಮ ಮಂದಿರದಲ್ಲಿ ಸರಸ್ವತಿ ಪೂಜೆ 3.2.2023
ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ವತಿಯಿಂದ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಸರಸ್ವತಿ ಪೂಜೆ ನಡೆಯಿತು. ಶ್ರೀ ಕ್ಷೇತ್ರ ಕಣಿಯೂರಿನ ಶ್ರೀ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿಯವರು ತಮ್ಮ ನುಡಿಗಳಲ್ಲಿ “ಈ ಶಾಲೆಯಲ್ಲಿ ಪ್ರತಿನಿತ್ಯವೂ ಸರಸ್ವತಿ ಪೂಜೆ ಮಾಡುತ್ತಿರುವುದು ವಿಶೇಷ, ಹಾಗಾಗಿಯೇ ಈ ಶಾಲೆ ಬೇರೆ ಶಾಲೆಗಳಿಗಿಂತ ಭಿನ್ನವಾಗಿದೆ. ವಿದ್ಯಾರ್ಥಿಗಳು ಸಂಸ್ಕಾರವನ್ನು ಪ್ರತಿಯೊಂದು ಹಂತದಲ್ಲಿ ಕಲಿತು ಬೆಳೆಯುತ್ತಿದ್ದಾರೆ ಎನ್ನುತ್ತಾ ಆ ದೇವರು ಎಲ್ಲರಿಗೂ ದೈಹಿಕವಾಗಿ, ಮಾನಸಿಕವಾಗಿ, ಶಾರೀರಿಕವಾಗಿ ಮಾಡುವ ಎಲ್ಲಾ ಚಟುವಟಿಕೆಗಳಿಗೆ ಚೈತನ್ಯವನ್ನು ತುಂಬಲಿ” ಎಂದು ಆಶೀರ್ವದಿಸಿದರು. ವಿದ್ಯಾಕೇಂದ್ರದ ಶಿಶುಮಂದಿರ,
ಪ್ರೌಢಶಾಲಾ ನೂತನ ಕಟ್ಟಡದ ಶಿಲಾನ್ಯಾಸ 14.01.2023
ಶ್ರೀರಾಮ ಪ್ರೌಢಶಾಲೆ ಕಲ್ಲಡ್ಕದ ನೂತನ ಕಟ್ಟಡಕ್ಕೆ ಶಿಲಾನ್ಯಾಸವನ್ನು ಮುಂಬೈನ ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆಯ ಚಯರ್ಮೆನ್ ಆಗಿರುವ ಕೂಳೂರು ಕನ್ಯಾನ ಶ್ರೀ ಸದಾಶಿವ ಕೆ. ಶೆಟ್ಟಿ ಇವರು ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು “ನಾವು ನಡೆಯುವ ದಾರಿಯಲ್ಲಿ ಸಂಘರ್ಷಗಳು ಸಾಮಾನ್ಯ. ಸಂಘರ್ಷಗಳನ್ನು ತಾಳ್ಮೆಯಿಂದ ಬಗೆಹರಿಸಿ ಜೀವನದಲ್ಲಿ ಉತ್ತಮವಾಗಿ ಇರುವುದನ್ನು ಸಾಧಿಸಬೇಕು. ನಮ್ಮ ಜೀವನದಲ್ಲಿ ಸ್ವಾಮಿ ವಿವೇಕಾನಂದ ಹಾಗೂ ಸುಭಾಷ್ಚಂದ್ರ ಬೋಸ್ರಂತಹ ಮಹಾನ್ ವ್ಯಕ್ತಿಗಳನ್ನು ಆದರ್ಶವಾಗಿಟ್ಟುಕೊಂಡು ನಡೆಯಬೇಕು ಮತ್ತು ಜೀವನದಲ್ಲಿ ಇಟ್ಟ ಹೆಜ್ಜೆಯನ್ನು ಯಾವತ್ತೂ
FIrst position in National Level Mathematics – Science Fair
ಮಧ್ಯಪ್ರದೇಶದ ಭೋಪಾಲ್ ನಲ್ಲಿ ನಡೆದ ರಾಷ್ಟ್ರ ಮಟ್ಟದ ಗಣಿತ ವಿಜ್ಞಾನ ಮೇಳದಲ್ಲಿ ಬೆಳಕು ಮತ್ತು ಅದರ ಅನ್ವಯಿಕಗಳು ಎಂಬ ಮಾದರಿ ಪ್ರದರ್ಶನದಲ್ಲಿ ಶ್ರೀರಾಮ ಪ್ರಾಥಮಿಕ ಶಾಲೆಯ 7ನೇ ತರಗತಿಯ ಮೋನಿಷಾ ಮತ್ತು 6ನೇ ತರಗತಿಯ ಸಾನ್ವಿ ಕಾಮತ್ ಪ್ರಥಮ ಸ್ಥಾನ ಪಡೆದಿರುತ್ತಾರೆ.gartenmöbel design bettwäsche tom und jerry planeta sport muske patike novi pazar giorgio armani sport adidas beckenbauer trening bomber jakke burgunder гуми 18 цола esprit round